ಮನೆಯೊಳಗೆ ಬರೀ ಮನುಷ್ಯರಷ್ಟೇ ಅಲ್ಲ
ನಾಯಿ ಬೆಕ್ಕುಗಳೂ ಬೇಕು
ಅವಿಲ್ಲದೇ ಮನೆ ಮನೆಯಾಗುವುದಿಲ್ಲ
ಮನೆಯೊಳಗೆ ಇಲಿ ಇರಬೇಕು
ಮನೆಯೊಳಗೆ ಜಿರಲೆಗಳೂ ಬೇಕು
ಮನೆಯೊಳಗೆ ಬೇಕು ಹಲ್ಲಿ
ಮನೆಯೊಳಗಿರಬೇಕು ಸೊಳ್ಳೆಗಳು
ಮನೆಗೆ ಆಗಾಗ ಬರುತ್ತಿರಬೇಕು ನೆಂಟರು
ಆಯುಷ್ಯದಲ್ಲಿ ಒಮ್ಮೆಯಾದರೂ
ಮನೆಯೊಳಗೆ ಬರಬೇಕು ಹಾವು
ಹಾಗಾಗದೇ ಮನೆ ಮನೆಯೆನಿಸುವುದಿಲ್ಲ
ಮನೆ ಕೇವಲ ಮನುಷ್ಯನದೇ ಮತ್ತು
ಮನುಷ್ಯನಿಗಾಗಿಯಷ್ಟೇ ಅಲ್ಲ
ಮನೆ ಸರ್ವ ಪ್ರಾಣಿಸಂಕುಲಕ್ಕೆ ಸೇರಿದ್ದು
ನಾನು ವಾಸಿಸುವ ಮನೆಯೊಳಗೆ
ಅವೆಲ್ಲ ಇವೆ.
ನಾನೇ ಇಲ್ಲ!
- ಕಾಶಿನಾಥ್ ಶಾಂಬಾ ಲೋಲಿಯೆಂಕಾರ್
ಎಸ್. ಡಿ. ತೆಂಡುಲ್ಕರ್ ಎನ್ನುವ ಮಹಾನುಭಾವ ಕೊಂಕಣಿ ಕವಿತೆಗಳನ್ನು ಬರೆಯುವುದು ಕಾಶಿನಾಥ್ ಶಾಂಬಾ ಲೋಲಿಯೆಂಕಾರ್ ಎನ್ನುವ ಹೆಸರಿನಲ್ಲಿ.
ವಿಚಿತ್ರ ಸ್ವಭಾವದ ಈ ಕವಿ, ತನ್ನ ಫೋಟೋ ಯಾರಿಗೂ ಕೊಡುವುದಿಲ್ಲ. ಫೋಟೋ ತೆಗೆಯಲೂ ಬಿಡುವುದಿಲ್ಲ. ಪ್ರಶಸ್ತಿಗಳಿಗೆ ಪುಸ್ತಕ ಕಳುಹಿಸುವುದಿಲ್ಲ. ಯಾರಾದರೂ ತಾವಾಗಿಯೇ ಪ್ರಶಸ್ತಿ ನೀಡಿದರೂ ಸ್ವೀಕರಿಸುವುದಿಲ್ಲ.
ಅವರ ಕವಿತೆಗಳೂ ಅವರಂತೆಯೇ, ಬೇರೇಯೇ ತರದವು. ಇಡೀ ಭಾರತೀಯ ಸಾಹಿತ್ಯದಲ್ಲೇ ಬೇರೆಯೇ ಎನಿಸುವಂತವು.
ಕೃಪೆ: http://www.kavitaa.com/
0 comments:
ಕಾಮೆಂಟ್ ಪೋಸ್ಟ್ ಮಾಡಿ