ಜನವರಿ 19, 2011

ಸೆಗಣಿ

ಊರೊಳಗೆ ಕಾಲಿಡಲು ಜಾಗವಿಲ್ಲ
ಎಲ್ಲಿ ನೋಡಿದರಲ್ಲಿ ಸೆಗಣಿ..

ಗಲ್ಲಿಗಲ್ಲಿಯಲ್ಲಿ,
ಹೆಜ್ಜೆ ಹೆಜ್ಜೆಗೂ,
ಬೀದಿಯಲ್ಲಿ, ಬಾಗಿಲಲ್ಲಿ,

ಚಪ್ಪಲಿ ಕೊಳೆಯಾದೀತೆಂದು
ಬರಿಗಾಲಲ್ಲಿ ನಡೆಯುತ್ತಿದ್ದರು ಜನರು
ನಾನೂ ಮೊದಲ ಬಾರಿಗೆ
ಬರಿಗಾಲಲ್ಲಿ, ಭಿಕಾರಿಯೆಂದಲ್ಲ.

ಕೊನೆಗೊಮ್ಮೆ ತುಳಿದೇ ಬಿಟ್ಟೆ!

ಎಷ್ಟೆಂದು ಹಾರಿ ಎಗರಲಿ ನಾನು,
ಎಷ್ಟೆಂದು ಟೊಂಕ ಹಾಕಲಿ,
ಎಷ್ಟೆಂದು ಆಡಲಿ ಕುಂಟಾಬಿಲ್ಲೆ,

ನೀರರಸಿ ನಡೆದಾಗ
ಬಳಿಯಲ್ಲೇ ಇತ್ತು ಇಗರ್ಜಿ

ಅಲ್ಲಿ, ಅಂತಿಮ
ಗುರುವಾರದ ಪೂಜೆ, 
ಪಾದರಿ ಆಪೋಸ್ತಲರ
ಕಾಲು ತೊಳೆಯುತ್ತಿದ್ದರು

ಕಿಟಕಿಯಿಂದ ಇಣುಕುತ್ತಾ ನಿಂತೆ

ಈ ಕೊಳೆ ತೊಳೆಯಲು
ಆ ’ಟೀಸ್ಪೂನ್’ ನೀರು ಎಲ್ಲಿ ಸಾಕು?
ಈ ಕಾಲು ಒರಸಲು
ಅವರ, ತುಣುಕು ಅಂಗೈಬಟ್ಟೆ ಎಲ್ಲಿ ಸಾಕು?

ಆ ಕ್ಷಣಕ್ಕೆ,
ಗುಡುಗು ಮಿಂಚು,
ಮಳೆ ಸುರಿದೇ ಸುರಿಯಿತು

ಸೂರಿನ ಅಂಚಿನಿಂದ ಸುರಿಯುತ್ತಿರುವ
ನೀರಧಾರೆಗೆ ಕಾಲೊಡ್ಡಿದೆ.
ಕೊಳೆಯೆಲ್ಲಾ ತೊಳೆದು ಹೋಯಿತು.

ಅಂಟಿರುವ ಕೊಳೆತೊಳೆದು ಪುನೀತನಾಗಲು
ಒಳಗೆ ಹೋಗಬೇಕೆಂದೇನೂ ಇಲ್ಲ.
ಹೊರಗೆ ನಿಂತರೂ ಸಾಕು
ಮೈಲಿಗೆಯ ಅಂಜಿಕೆಯೂ ಇಲ್ಲ.
____________________________
ಕೊಂಕಣಿ ಮೂಲ: ಮೆಲ್ವಿನ್ ರೊಡ್ರಿಗಸ್

0 comments:

ಕಾಮೆಂಟ್‌‌ ಪೋಸ್ಟ್‌ ಮಾಡಿ